Feature Article - City Big News

Feature Article

A feature article blends hard facts with rigorously sourced details to paint a thorough picture and give a complete story

Coming Soon...
Recently

ಫೋನ್ ಟ್ಯಾಪಿಂಗ್ ಮಾಡಿ..ಸರ್ಕಾರ ಯಾಕೆ ಬೀಳಿಸಿಕೊಳ್ಳುತ್ತಿದ್ದೆ..?

ಆದಿಚುಂಚನಗಿರಿ ಶ್ರೀಗಳ ಪೋನ್ ಟ್ಯಾಪಿಂಗ್ ಬಗ್ಗೆ ಸಚಿವ ಚೆಲುವರಾಯಸ್ವಾಮಿ ಮಾಡಿರುವ ಆರೋಪದ ಬಗ್ಗೆ ತೀಕ್ಷ್ಣವಾಗಿ ಉತ್ತರಿಸಿದ ಕುಮಾರಸ್ವಾಮಿ, ನಾನು ಫೋನ್ ಟ್ಯಾಪಿಂಗ್ ಮಾಡಿಕೊಳ್ಳುತ್ತಿದ್ದರೆ ನನ್ನ ಸರಕಾರವನ್ನು ಯಾಕೆ ಬೀಳಿಸಿಕೊಳ್ಳುತ್ತಿದ್ದೆ? ಅವರು ತನಿಖೆ ಮಾಡಿಕೊಳ್ಳಲಿ, ಈವರೆಗೆ ತನಿಖೆ ಮಾಡಿದರಲ್ಲ, ಅದು ಏನಾಯಿತು? ಎಂದು ತರಾಟೆಗೆ ತೆಗೆದುಕೊಂಡರು. ಆದಿಚುಂಚನಗಿರಿ ಮಠಕ್ಕೆ ಪರ್ಯಾಯವಾಗಿ ಮಠ ಮಾಡಿದರು ಎನ್ನುವ ಬಗ್ಗೆ ಕೇಳಲಾದ ಪ್ರಶ್ನೆಗೆ ಖಾರವಾಗಿ ಉತ್ತರಿಸಿದ ಹೆಚ್‌ ಡಿಕೆ, ಬೇರೆ ಸಮುದಾಯಗಳಲ್ಲೂ ಎಷ್ಟು ಮಠಗಳಿಲ್ಲ.? ನಮ್ಮ ಸಮುದಾಯದಲ್ಲೂ ಅಂಥ ಬೆಳವಣಿಗೆ ಆಗಲಿ ಎಂದು […]

“ಕೊತ್ವಾಲ್ ರಾಮಚಂದ್ರನ ಗರಡಿಯಲ್ಲಿ ಬೆಳೆದ ಸ್ಟ್ರೀಟ್ ಫೈಟರ್”..!‌

ಡಿಸಿಎಂ ಡಿ.ಕೆ. ಶಿವಕುಮಾರ್‌ ಹಾಗೂ ಹೆಚ್.ಡಿ. ಕುಮಾರಸ್ವಾಮಿ ಮಧ್ಯೆ ಮಾತಿನ ಮಲ್ಲಯುದ್ಧ ಜೋರಾಗಿದೆ. ಡಿಕೆಶಿಯ ಪ್ರತಿ ಹೇಳಿಕೆಗೂ ಕೌಂಟರ್‌ ಕೊಡುತ್ತಿರುವ ಹೆಚ್‌ ಡಿಕೆ, ಈಗ ಮತ್ತೆ ವಾಗ್ದಳಿ ನಡೆಸಿದ್ದಾರೆ. ಹಾಸನದಲ್ಲಿ ಮಾತನಾಡಿದ ಮಾಜಿ ಸಿಎಂ ಹೆಚ್‌.ಡಿ. ಕುಮಾರಸ್ವಾಮಿ, ಡಿಕೆ ಶಿವಕುಮಾರ್ ಪದೇಪದೆ ತಾನೊಬ್ಬ ಸ್ಟ್ರೀಟ್ ಫೈಟರ್ ಅಂತ ಹೇಳ್ತಾರೆ. ಅದರಲ್ಲಿ ಯಾವುದೇ ಸಂಶಯವೇ ನಿಮಗೆ ಬೇಡ. ಕುಖ್ಯಾತ ರೌಡಿ ಕೊತ್ವಾಲ ರಾಮಚಂದ್ರನ ಗರಡಿಯಲ್ಲಿ ಬೆಳೆದವರು ಸ್ಟ್ರೀಟ್ ಫೈಟರ್ ಆಗದೆ ಮತ್ತೇನಾಗ್ತಾರೆ. ನನ್ನ ಅಫಿಡವಿಟ್ ನಲ್ಲಿ ಘೋಷಿಸಿದ ಆಸ್ತಿ […]

“ಸ್ವಾಮೀಜಿ ನಿಮ್ಮವು ನೂರಾರು ವಿಷಯಗಳು ನನ್ನ ಕಡೆ ಇವೆ”

ಈ ಬಾರಿಯ ಲೋಕಸಭಾ ಚುನಾವಣೆಯ ಅಖಾಡದಲ್ಲಿ ಸ್ವಾಮೀಜಿಗಳ ಪ್ರಸ್ತಾಪವೂ ಹೆಚ್ಚಾಗಿದೆ. ಪಂಚಮಸಾಲಿ ವಿಚಾರದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್‌ ಸಹಾಯಕ್ಕೆ ಧಾವಿಸಿದ ಜಯಮೃತ್ಯುಂಜಯ ಸ್ವಾಮೀಜಿ ವಿರುದ್ಧ ಬಿಜೆಪಿ ನಾಯಕ ಮುರುಗೇಶ್‌ ನಿರಾಣಿ ಕಿಡಿಕಾರಿದ್ದಾರೆ. ಬಸವಜಯಮೃತ್ಯುಂಜಯ ಸ್ವಾಮೀಜಿ ಆಗಮಿಸಿ ಹೆಬ್ಬಾಳ್ಕರ್ ಪರ ನಿಂತಿದ್ದಾರೆ. ‘ಲಕ್ಷ್ಮೀ ಹೆಬ್ಬಾಳ್ಕರ್ ಪಂಚಮಸಾಲಿ ಸಮುದಾಯದವರು, ಯಾರೊ ಒಬ್ಬರು ಏನೂ ಹೇಳಿದರೆ ಪ್ರತಿಕ್ರಿಯೆ ಕೊಡಲ್ಲ ಎಂದು ಸ್ವಾಮೀಜಿ  ಹೇಳಿದ್ದಾರೆ. ಸ್ವಾಮೀಜಿಗಳ ಮಾತಿನಿಂದ ಕೆರಳಿ ಕೆಂಡವಾಗಿರೋ ಮುರುಗೇಶ್ ನಿರಾಣಿ, ‘ಯಾರೊ ಒಬ್ಬರು ಅಲ್ಲ, ನಾನೇ ಹೇಳಿದ್ದೇನೆ. ಬಾಗಲಕೋಟೆಯಲ್ಲಿ ಮಾತನಾಡಿದ ನಿರಾಣಿ, […]

ಮೋದಿ ಫೋಟೋ ಬಳಸದೆ ಗೆಲ್ಲಲಿ ನೋಡೋಣ..!

ಪ್ರಚಾರದಲ್ಲಿ ನರೇಂದ್ರ ಮೋದಿ ಫೋಟೋ ಬಳಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಬಿಜೆಪಿ ನಾಯಕರ ವಿರುದ್ಧ ಕೆ.ಎಸ್‌. ಈಶ್ವರಪ್ಪ ಕಿಡಿಕಾರಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ, ಮೋದಿ ಫೋಟೋ ಬಳಸದಂತೆ ನನ್ನನ್ನ ತಡೆಯಲು ಅವರು ಯಾರು..? ಪ್ರಧಾನಿ ನರೇಂದ್ರ ಮೋದಿ ಒಬ್ಬ ವಿಶ್ವನಾಯಕ. ಅವರನ್ನ ನಾನು  ಹೃದಯದಲ್ಲಿಟ್ಟಿದ್ದೇನೆ. ಈ ವಿಚಾರದಲ್ಲಿ ನನ್ನನ್ನು ಯಾರೂ ತಡೆಯಲು ಸಾಧ್ಯವಿಲ್ಲ ಅಂತ ಖಡಕ್‌ ಆಗಿ ಹೇಳಿದ್ದಾರೆ. ಯಡಿಯೂರಪ್ಪ ಅವರು ನರೇಂದ್ರ ಮೋದಿ ಫೋಟೋ ಬಳಸದೆ ಶಿವಮೊಗ್ಗದಲ್ಲಿ ತಮ್ಮ ಮಗ ರಾಘವೇಂದ್ರನನ್ನ ಗೆಲ್ಲಿಸುತ್ತಾರಾ.? […]

ಭೀಕರ ಅಪಘಾತದಲ್ಲಿ..ಮೂವರ ದುರ್ಮರಣ..!

KSRTC ಬಸ್ ಹಾಗೂ ಓಮಿನಿ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿ ಮೂವರು ಸಾವನ್ನಪ್ಪಿದ್ದಾರೆ. ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ದಾವಣಗೆರೆಯ ನ್ಯಾಮತಿ ತಾಲೂಕಿನ ಚಿನ್ನಿಕಟ್ಟಿ ಬಳಿ ದುರ್ಘಟನೆ ನಡೆದಿದೆ. ನಂಜುಂಡಪ್ಪ, ರಾಕೇಶ್, ದೇವರಾಜ್ ಮೃತ ದುರ್ದೈವಿಗಳು. ಮಗು ಸೇರಿ ನಾಲ್ವರಿಗೆ ಗಂಭೀರ ಗಾಯಗಳಾಗಿವೆ. ಗಾಯಗೊಂಡ ಕೆಲವರನ್ನು ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನೂ ಕೆಲವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಶಿಫ್ಟ್​ ಮಾಡಲಾಗಿದೆ. ಎಲ್ಲರೂ ಹೊನ್ನಾಳಿ ತಾಲೂಕಿನ ಅರಬಘಟ ಮೂಲದವರು ಎಂದು ತಿಳಿದುಬಂದಿದ್ದು, ನ್ಯಾಮತಿ ಪೊಲೀಸರು ದುರ್ಘಟನಾ ಸ್ಥಳಕ್ಕೆ […]

ಬೆಂಗಳೂರಲ್ಲಿ “ಆಪರೇಷನ್ ಬುಲ್”..!

ನಮ್ ಸಿಲಿಕಾನ್‌ ಸಿಟಿಗೆ ಯಾವ್ದೆಲ್ಲಾ ಕಂಟಕ ಆಗತ್ತೋ ಗೊತ್ತಿಲ್ಲ. ಬೆಂಗಳೂರಲ್ಲಿ ಬೀದಿ ನಾಯಿ ಹಾವಳಿ ಅಂತ ಕೆಲವ್ರು..ಬೆಂಗಳೂರಿನಲ್ಲಿ ನೀರಿಲ್ಲ ಅಂತ ಹಲವ್ರು…ಜೊತೆಗೆ ಟ್ರಾಫಿಕ್‌ ಕಿರಿಕಿರಿ ಬೇರೆ…ಈ ಲಿಸ್ಟ್‌ಗೆ ಈಗ…ಗೂಳಿನೂ ಸೇರ್ಕೊಂಡ್‌ ಬಿಟ್ಟಿದೆ. ಇದೇನ್ರಿ ಗೂಳಿ ಕಾಟ ಅಂತ ಕೇಳ್ತೀರಾ ಇಲ್ಲಿದೆ ನೋಡಿ ಆನ್ಸರ್‌. ಬೆಂಗಳೂರಿನಲ್ಲಿ ಇತ್ತೀಚಿಗೆ ಗೂಳಿಗಳ ಹಾವಳಿ ಜಾಸ್ತಿಗೆ ಆಗ್ತಿದೆ. ರಾಜಧಾನಿಯ ರಸ್ತೆಗಳಲ್ಲಿ ಕೊಲೆ ಬಸವನದ್ದೇ ಹಾವಳಿ. ಸುಮ್ಮನಿದ್ರೆ ಓಕೆ ಆದರೆ ಗುಮ್ಮೋದಕ್ಕೂ ಶುರು ಮಾಡಿದ್ರೆ ಜನರ ಸ್ಥಿತಿ ಏನಾಗಬೇಡ ಹೇಳಿ. ಬೆಂಗಳೂರಿನ ಬಿಟಿಎಂ ಲೇಔಟ್ನಲ್ಲಿ […]

ಮೈಸೂರು ಯುದ್ಧ..ಯಾರಿಗೆ ಖೆಡ್ಡಾ.?

ಡಿಕೆ ಬ್ರದರ್ಸ್‌ ಭದ್ರಕೋಟೆಗೆ ಲಗ್ಗೆ ಇಟ್ಟ ಅಮಿತ್‌ ಶಾ, ಕನಕಪುರ ಬಂಡೆಗೆ ಡಿಚ್ಚಿ ಕೊಟ್ಟು ಹೋದ್ರು, ಈಗ ನರೇಂದ್ರ ಮೋದಿ ಸರದಿ, ಹೌದು ಬೆಂಗಳೂರು ಗ್ರಾಮಾಂತರ ಕ್ಷೇತ್ರದಂತೆ ಹೈವೋಲ್ಟೇಜ್‌ ಕಣ ಆಗಿರೋ ಮೈಸೂರು ಲೋಕಸಭಾ ಕ್ಷೇತ್ರ, ಸದ್ಯ ಪ್ರತಿಷ್ಠೆಯ ಅಖಾಡ. ಮೈಸೂರು ಲೋಕಸಭಾ ಕ್ಷೇತ್ರ ಮುಖ್ಯಮಂತ್ರಿ ಸಿದ್ದರಾಮಯ್ಯನವರ ತವರು ಕ್ಷೇತ್ರ. ಹೀಗಾಗಿ ಸಿಎಂ ಸಿದ್ದರಾಮಯ್ಯಗೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ಗೆಲ್ಲಬೇಕಾದ ಅನಿವಾರ್ಯತೆ. ಮುಖ್ಯಮಂತ್ರಿ ಆಗಿ ತವರು ಕ್ಷೇತ್ರದಲ್ಲೇ ಸೋತರೆ ತಪ್ಪು ಸಂದೇಶ ರವಾನೆ ಆಗಲಿದೆ. ವಿರೋಧ ಪಕ್ಷದ […]

ರಾಜ್ಯದ ಟಾಪ್‌ 10 ಕೋಟ್ಯಾಧಿಪತಿ ಅಭ್ಯರ್ಥಿಗಳು..!

ದೇಶಾದ್ಯಂತ ಚುನಾವಣಾ ಕಾವು ಜೋರಾಗುತ್ತಿದೆ. ಕರ್ನಾಟಕದಲೂ ಇದರ ಕಾವು ಹೆಚ್ಚಾಗುತ್ತಿದೆ. ಈಗ ರಾಜ್ಯದ ಶ್ರೀಮಂತ ಅಭ್ಯರ್ಥಿಗಳ ಆಸ್ತಿ ಬಗ್ಗೆ ಕ್ಯೂರಿಯಾಸಿಟಿ ಎದ್ದಿದೆ. ಹಾಗಾದ್ರೆ ಕರ್ನಾಟಕದ ಟಾಪ್‌ 10 ಕೋಟ್ಯಾಧಿಪತಿ ಅಭ್ಯರ್ಥಿಗಳ ಲಿಸ್ಟ್‌ ಇಲ್ಲಿದೆ ನೋಡಿ. ಡಿಕೆ ಸುರೇಶ್, ಬೆಂಗಳೂರು ಗ್ರಾಮಾಂತರ ಕಾಂಗ್ರೆಸ್‌ ಅಭ್ಯರ್ಥಿ ಡಿಕೆ ಸುರೇಶ್ ಶ್ರೀಮಂತ ಅಭ್ಯರ್ಥಿಗಳ ಲಿಸ್ಟ್‌ನಲ್ಲಿ ನಂಬರ್ 1 ಸ್ಥಾನ ಒಟ್ಟು ಆಸ್ತಿ ಮೌಲ್ಯ 593.04 ಕೋಟಿ ಕಳೆದ 5 ವರ್ಷಗಳಲ್ಲಿ 259 ಕೋಟಿ ಆಸ್ತಿ ಹೆಚ್ಚಳ 150 ಕೋಟಿ ಸಾಲ ಒಂದೂಕಾಲು […]

ಬಂಡೆ ಪುಡಿಯಾಗುವ ಸಮಯ..ವಿಜಯೇಂದ್ರ ವಾಗ್ದಾಳಿ

ಬಿಜೆಪಿ ಕಾರ್ಯಕರ್ತ‌ ನವೀನ್ ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವುದಕ್ಕೆ ನಾಯಕರು ಕೆಂಡಕಾರಿದ್ದಾರೆ. ಈ ವಿಚಾರದಲ್ಲಿ ರಾಜ್ಯ ಸರ್ಕಾರವನ್ನು ಬಿಜೆಪಿ ತರಾಟೆಗೆ ತೆಗೆದುಕೊಂಡಿದೆ. ಈ ಸಂಬಂಧ ಎಕ್ಸ್ ನಲ್ಲಿ ಪೋಸ್ಟ್‌ ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಣ, ಹೆಂಡ ಮತ್ತು ತೋಳ್ಬಲಕ್ಕೆ ಹೆಸರಾಗಿರುವ ಬೆಂಗಳೂರು ಗ್ರಾಮಾಂತರದಲ್ಲಿ, ಈಗ ಬಂಡೆ  ಪುಡಿಯಾಗುವ ಸಮಯ ಬಂದಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಕಾಂಗ್ರೆಸ್‌ ವಿರುದ್ಧ ನಿಂತವರ ಮೇಲೆ ಅಮಾನುಷವಾಗಿ ಹಲ್ಲೆ ನಡೆಸುತ್ತಿದ್ದಾರೆ. ಇದಕ್ಕೆ ಮತದಾರರೆ ಉತ್ತರ ನೀಡಲಿದ್ದಾರೆ ಎಂದು ಪೋಸ್ಟ್‌ ಮಾಡಿದ್ದಾರೆ. […]

ಬಂಡೆ ಪುಡಿಯಾಗುವ ಸಮಯ..ವಿಜಯೇಂದ್ರ ವಾಗ್ದಾಳಿ

ಬಿಜೆಪಿ ಕಾರ್ಯಕರ್ತ‌ ನವೀನ್ ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವುದಕ್ಕೆ ನಾಯಕರು ಕೆಂಡಕಾರಿದ್ದಾರೆ. ಈ ವಿಚಾರದಲ್ಲಿ ರಾಜ್ಯ ಸರ್ಕಾರವನ್ನು ಬಿಜೆಪಿ ತರಾಟೆಗೆ ತೆಗೆದುಕೊಂಡಿದೆ. ಈ ಸಂಬಂಧ ಎಕ್ಸ್ ನಲ್ಲಿ ಪೋಸ್ಟ್‌ ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಣ, ಹೆಂಡ ಮತ್ತು ತೋಳ್ಬಲಕ್ಕೆ ಹೆಸರಾಗಿರುವ ಬೆಂಗಳೂರು ಗ್ರಾಮಾಂತರದಲ್ಲಿ, ಈಗ ಬಂಡೆ  ಪುಡಿಯಾಗುವ ಸಮಯ ಬಂದಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಕಾಂಗ್ರೆಸ್‌ ವಿರುದ್ಧ ನಿಂತವರ ಮೇಲೆ ಅಮಾನುಷವಾಗಿ ಹಲ್ಲೆ ನಡೆಸುತ್ತಿದ್ದಾರೆ. ಇದಕ್ಕೆ ಮತದಾರರೆ ಉತ್ತರ ನೀಡಲಿದ್ದಾರೆ ಎಂದು ಪೋಸ್ಟ್‌ ಮಾಡಿದ್ದಾರೆ. […]